Nammuru..... Nammajana

ನಮ್ಮೂರು..... ನಮ್ಮ ಜನ....

Tuesday, December 14, 2010

ಕಾಡಾನೆ ದಿಕ್ಕು ತಪ್ಪಿ...

ಮದಗಜ ನರಹಂತಕನಾದ..
ಆರನೆ ಬಲಿಗೆ ಪ್ರಕೃತಿ ಪ್ರೇಮಿಯನ್ನೇ ಬಲಿ ತೆಗೆದುಕೂಂಡ..

ಕೂನೆಗೂ ಸೆರೆಸಿಕ್ಕಿತು ಪುಂಡಾನೆ.. ಗಂಡಾನೆಯ ಪುಂಡಾಟಕೆ ಆರನೇ ಬಲಿ..
ಬಲಿಯಾಗಿದ್ದು ವನ್ಯಜೀವಿ ಪ್ರೇಮಿ!
ane1


ತಿಪಟೂರಿನ ಸುತ್ತ ಮುತ್ತಲಿನ ಅರಣ್ಯ ಒಳಗೂಂಡ ಪುಟ್ಟ ಊರುಗಳಲ್ಲಿನ ಜನ ನಿದ್ದೆ ಮರೆತು ಜೀವ ಹಿಡಿದು ಕೂರುವಂತಾಗಿದೆ.ಕಾರಣ ಕಾಡು ತೂರೆದು ನಾಡಿಗೆ ಬರುತ್ತಿರುವ ಕಾಡು ಮೃಗಗಳು. ಮೊನ್ನೆಯಷ್ಟೇ ಹುಲ್ಲೆನಳ್ಳಿ ಕಾವಲಿನ ಕಿರಣ್ ಎಂಬುವ ಪುಟ್ಟ ಬಾಲಕನ್ನ ಬಲಿ ತೆಗೆದುಕೂಂಡ ಚಿರತೆ, ಅರಣ್ಯ ಇಲಾಖೆಯವರ ಸಾಹಸದಿಂದ ಸೆರೆಸಿಕ್ಕಿತ್ತು. ಈಗಲೂ ಸೂಗೂರು,ನೂಣವಿನಕೆರೆ ಸುತ್ತ ಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಚಿರತೆಗಳ ಘರ್ಜನೆ ಆಗಾಗ ಕೇಳಿ ಬರುತ್ತಿದೆ.ಕಿಬ್ಬನಹಳ್ಳಿಯಲ್ಲಿ ಕರಡಿಗಳು ಕಾಣುತ್ತಿವೆ.
yogees-house
The animals photos in Yogeesh home, tipturinfo.com
ಇನ್ನು ಈ ವಿಚಾರಗಳು ಮರೆತು ಮರೆಯಾಗುವ ಮೂದಲೆ ಮದಗಜನ ಸಾವಿನ ಗೀಳಿಡುವಿಕೆಯ ಕೂಂಡಿಗೆ ಆರನೇ ಬಲಿ ಬೆಸೆದುಕೂಂಡಿದೆ, ವಿಚಿತ್ರವೆಂದರೆ ಈ ಬಾರಿ ಬಲಿಯಾಗಿದ್ದು ನಿವೃತ್ತ ಅರಣ್ಯ ವಲೆಯಾಧಿಕಾರಿ ಮಗ ಹಾಗು ವನ್ಯಜೀವಿ ಪ್ರೇಮಿ ಯೋಗೀಶ್! ಗ್ಯಾರಘಟ್ಟ ಸಮೀಪದ ರಾಮೇನಹಳ್ಳಿ ಬಳಿ ತೋಟದ ಮನೆಯ ನಿವಾಸಿ ಯೋಗೀಶ್ ( 35) ವರ್ಷದ ಹಿಂದಷ್ಟೇ ವಿವಾಹವಾಗಿದ್ದ. ತಮ್ಮ ತೋಟದ ತಗ್ಗಿನಲ್ಲಿದ್ದ ಕೆರೆ ಬಳಿ ಹೋದಾಗ ಅಲ್ಲಿದ್ದ ಆನೆ ಹಿಗ್ಗಾಮುಗ್ಗಾ ತುಳಿದು ಅಪ್ಪಚ್ಚಿ ಮಾಡಿತ್ತು. ಇವರ ತಂದೆ ಮೂಲತಃ ಅರಸೀಕೆರೆ ತಾಲ್ಲೂಕು ಕಾಮಸಮುದ್ರ ಸಮೀಪದ ಕಸವನಹಳ್ಳಿ ಗ್ರಾಮದವರಾದ ಇವರು ರಾಮೇನಹಳ್ಳಿ ಬಳಿ ಜಮೀನು ಖರೀದಿಸಿ ಅಲ್ಲಿಯೇ ಮನೆ ಕಟ್ಟಿಕೊಂಡು ವಾಸವಿದ್ದರು. ಬಿಎಸ್ಸಿ ಓದಿದ್ದ ಏಕೈಕ ಪುತ್ರ ಯೋಗೀಶ್‌ಗೆ ಸೋದರಿ ಮಗಳನ್ನೇ ತಂದು ವರ್ಷದ ಹಿಂದೆ ಮದುವೆ ಮಾಡಿದ್ದರು. ಯೋಗೀಶ್ ಪತ್ನಿ ಚೈತ್ರ ತಿಪಟೂರಿನ ಕೆಐಟಿಯಲ್ಲಿ ೪ನೇ ಸೆಮಿಸ್ಟರ್‌ನಲ್ಲಿ ಎಂಜಿನಿಯರಿಂಗ್ ಓದು ಮುಂದುವರಿಸಿದ್ದರು. ಆನೆಯ ರೂಪದಲ್ಲಿ ಬಂದೆರಗಿದ ಆಘಾತ ಇಡೀ ಕುಟುಂಬವನ್ನು ದುಃಖದಲ್ಲಿ ಮುಳುಗಿಸಿದೆ.

ಶವದೂಂದಿಗೆ ಆಟವಾಡುತ್ತಿತ್ತು! ಮಾನವನ ಮೇಲೆ ಅದೆಷ್ಟು ಕೋಪವೂ ಉಹಿಸಲಾಗದು ಏಕೆಂದರೆ ಅದು ಯೋಗೀಶ್ ನನ್ನು ಕೂಂದಹಾಕಿರೂ ರೀತಿಯೇ ಅಂತಹದು ನೆಲಕ್ಕೆ ಅ‌ಪ್ಪಚ್ಚಿಯಾಗುವಂತೆ ತುಳಿದು ಮತ್ತೆ ಮತ್ತೆ ತುಳಿದಿದೆ ಎಂದು ನೋಡಿದರೆ ತಿಳಿಯುತಿತ್ತು.ಅದಲ್ಲದೆ ಸುಮಾರು ಎರೆಡು ಗಂಟೆಗಳ ಕಾಲ ಅಲ್ಲೇ ಇದ್ದು ಆಟವಾಡುತಿತ್ತು ಎಂದು ತಿಳಿಯಲಾಗಿದೆ.
ಅರಸೀಕೆರೆ ತಾಲ್ಲೂಕಿನಲ್ಲಿ ನಾಲ್ಕೈದು ತಿಂಗಳಿಂದ ಆತಂಕ ಸೃಷ್ಟಿಸಿ ಇಬ್ಬರನ್ನು ಬಲಿ ತೆಗೆದುಕೊಂಡು ಹಾವಳಿ ಇಟ್ಟಿದ್ದ ಈ ಆನೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಆ ತಾಲ್ಲೂಕಿನ ಹುಣಸೇಗುಂಡಿ ಬಳಿ ಮೂರು ದಿನದ ಹಿಂದೆ ಸಕಲ ಸಿದ್ಧತೆಯೊಂದಿಗೆ ಕ್ಯಾಂಪ್ ಹಾಕಿದ್ದರು. ಆ ಮದಗಜವನ್ನು ಬಂಧಿಸಲು ಪಳಗಿದ ಆನೆಗಳೊಂದಿಗೆ ಪ್ರಯತ್ನಿಸಿದ್ದರು. ಬುಧವಾರ ಸಂಜೆ ತಿಪಟೂರು ತಾಲ್ಲೂಕಿನ ಗಡಿ ಪ್ರವೇಶಿಸಿದ್ದ ಒಂಟಿ ಸಲಗ ಗುರುವಾರ ಬೆಳಗ್ಗೆ ಗ್ಯಾರಘಟ್ಟ ಹೊಸಕೆರೆ ಬಳಿ ಕಾಣಿಸಿಕೊಂಡಿತ್ತು. ಅಲ್ಲಿಗೆ ಕ್ಯಾಂಪ್ ಸಿಬ್ಬಂದಿ ಬೆನ್ನಟ್ಟಿ ಬಂದು ಸೆರೆ ಹಿಡಿಯುವ ಕಾರ್ಯಾಚರಣೆಗೆ ಸಿದ್ಧರಾಗಿದ್ದರು. ಅಷ್ಟರಲ್ಲಿ ಆ ಸ್ಥಳದಿಂದಲೂ ಆನೆ ಕಾಲು ಕಿತ್ತಿತ್ತು. ನಂತರ ಕೆರೆಯ ಆ ದಡದಿಂದ ಕೂಗಿಕೊಂಡ ತೋಟದ ಮನೆಯವರು ಪೊದೆಯ ಸಂದಿಯಲ್ಲಿ ವ್ಯಕ್ತಿಯೊಬ್ಬರ ಶವ ಇರುವುದಾಗಿ ತಿಳಿಸಿದಾಗಲೇ ಯೋಗೀಶ್ ಬಲಿಯಾಗಿದ್ದು ತಿಳಿಯಿತು. ಬೆಳಗ್ಗೆ ೮ರ ಸಮಯದಲ್ಲೇ ಮೃತಪಟ್ಟಿರುವುದು ನಂತರ ದೃಢಪಟ್ಟಿತು.ಈ ದುರಂತದ ನಡುವೆಯೇ ಕ್ಯಾಂಪ್ ಸಿಬ್ಬಂದಿ ಪಳಗಿದ ಆನೆಗಳೊಂದಿಗೆ ಬೆನ್ನತ್ತಿ ಅಲ್ಲಿಗೆ ಸಮೀಪದ ತೋಟವೊಂದರಲ್ಲಿದ್ದ ಒಂಟಿ ಸಲಗಕ್ಕೆ ಮತ್ತು ಬರಿಸುವ ಮದ್ದನ್ನು ಬಂದೂಕು ಮೂಲಕ ಶೂಟ್ ಮಾಡಿದರು.

ಅಲ್ಲಿಂದ ಸುಮಾರು ಒಂದೂವರೆ ಕಿಮೀ ಓಡಿದ ಅದು ನೆಲಕ್ಕುರುಳಿತು. ಕ್ರಿಪ್ರ ಗತಿಯಲ್ಲಿ ಪೂರಕ ಪ್ರಕ್ರಿಯೆ ಮುಗಿಸಿ ಮೂರು ಆನೆಗಳ ಸಹಾಯದಿಂದ ಬಂಧಿಸಿ, ನಿತ್ರಾಣಗೊಳಿಸಿ ಕರೆದೊಯ್ಯಲಾಯಿತು. ಸೆರೆಸಿಕ್ಕ ಈ ಗಂಡಾನೆಯ ವಯಸ್ಸು೨೮-೩೦ ವರ್ಷ ಇರಬಹುದೆಂದು ಸ್ಥಳದಲ್ಲಿ ಅಧಿಕಾರಿಗಳು ಅಂದಾಜಿಸಿದರು.

yogeesh2
Yogeesh, tipturinfo.com
ತುಳಿತಕೆ ಸಿಕ್ಕವರು.. ಇದಕ್ಕೆ ಮೊದಲು ಈ ಆನೆ ಬಾಣಾವಾರ ಸಮೀಪದ ಬುಚ್ಚನಕೊಪ್ಪಲು ಗ್ರಾಮದ ಕೃಷಿ ಕಾರ್ಮಿಕರೊಬ್ಬರನ್ನು ಆ. ೮ರಂದು, ಅದೇ ತಾಲ್ಲೂಕಿನ ಕಣಕಟ್ಟೆ ಸಮೀಪದ ರಾಂಪುರರೈತರೊಬ್ಬರನ್ನು ನ. ೨೮ರಂದು ಕೊಂದು ಹಾಕಿತ್ತು. ಅರಸೀಕೆರೆ ತಾಲ್ಲೂಕಿನಲ್ಲಿ ಹಾವಳಿ ಇಡುವ ಮೊದಲು ಗುಬ್ಬಿ ತಾಲ್ಲೂಕಿನಲ್ಲಿ ಆ. ೨ರಂದು ಈ ಆನೆಯ ದಾಂದಲೆಗೆ ಒಬ್ಬ ಅಸು ನೀಗಿದ್ದ. ಇದಕ್ಕೂ ಮೊದಲು ಬನ್ನೇರುಘಟ್ಟ ಸಮೀಪ ಇಬ್ಬರು ಈ ಆನೆಗೆ ಬಲಿಯಾಗಿದ್ದರು.





ವೆಂಕಟ್ ಎಂಬುವ ಶಾರ್ಪ್ ಶೂಟರ್..
vekat
Sharp shooter venkatesh, tipturinfo.com
ಆನೆಗಳನ್ನು ಹಿಡಿಯಲು ಎಲ್ಲಾ ಬಲಗಳ ಜೊತೆ ಒಬ್ಬ ಉತ್ತಮ ಗುರಿಕಾರ ಮುಖ್ಯ. ಆಲೂರು ವಲಯದ 52 ವರ್ಷದ ಶೂಟರ್ ವೆಂಕಟೇಶ್ ಇದೂವರೆಗೂ 57 ಆನೆಗಳನ್ನು ಶೂಟ್ ಮಾಡಿ ಆನೆಗಳನ್ನು ಸೆರೆಹಿಡಿಯಲು ಶ್ರಮವಹಿಸಿದ್ದಾರೆ. ತಿಪಟೂರಿನ ಗ್ಯಾರಘಟ್ಟದಲ್ಲಿ ಹಿಡಿದ ಆನೆದ 58 ನೆಯದು. ತನ್ನ ಬಂದೂಕಿಗೆ ಅರವಳಿಕೆ ಚಚ್ಚು ಮದ್ದು ಇಟ್ಟು ಗುರಿ ಇಟ್ಟ ಎಂದರೆ ಅದು ತಪ್ಪುವುದಿಲ್ಲ. ಗ್ಯಾರಘಟ್ಟದಲ್ಲಿ ಗುರುವಾರ ತುಂಬಾ ಅಪಾಯದ ಸ್ಥಿತಿಯಲ್ಲಿಯೂ ಮದವೇರಿದ ಆನೆಗೆ ಗುರಿಯಿಟ್ಟು ಅದನ್ನು ನೆಲಕ್ಕೆ ಕೆಡುವುದರಲ್ಲಿ ವೆಂಕಟೇಶ್ ಯಶಸ್ವಿಯಾದರು. ಮತ್ತಷ್ಟು ಅಪಾಯವಾಗುವ ಸನ್ನಿವೇಶವನ್ನು ಅಂತ್ಯಗೊಳಿಸಿದರು.





ಪುಂಡಾನೆ ಹಿಡಿಯಲು ಗಂಡೆದೆಯ ಅಭಿಮನ್ಯು..
ಕಾಡು ಬಿಟ್ಟು ಅಲೆಯುತ್ತಾ ನಾಡಿನ ಜನರಿಗೆ ಉಪದ್ರವ ನೀಡುವ ಆನೆಗಳನ್ನು ಹಿಡಿಯಲು ಸಾಹಸ ಮಾಡುವ ಅಭಿಮನ್ಯುವಿಗೆ ಈಗ ೩೫ ವರ್ಷ. ಎಂತಹ ಮದಗಜಗಳಾದರೂ ನುಗ್ಗಿ ಹಿಡಿಯುವ ರಾಜ್ಯದ ಏಕೈಕ ಪಳಗಿದ ಆನೆ ಇದು. ಇದೂವರೆಗೂ ಸಾಕಷ್ಟು ಆನೆಗಳನ್ನು ಹಿಡಿದು ಇಲಾಖೆಗೆ ಒಪ್ಪಿಸಿರುವ ಅಭಿಮನ್ಯು ಮುಂದೆabimanyu೧೦ ವರ್ಷ ಕೆಲಸ ಮಾಡುವ ಸಾಮಾರ್ಥ್ಯ ಪಡೆದಿದೆ. ಚಿಕ್ಕ ಮರಿಯಿಂದಲೂ ಜೇನುಕುರುಬರು ತಂದು ಸಾಕಿರುವ ಅಭಿಮನ್ಯುವಿಗೆ ಇತರೆ ಆನೆಗಳ ಕಂಡರೆ ಆಗದು ಅದರಲ್ಲಿ ಮನಷ್ಯರ ಗುಣವಿಶೇಷವಿರುವುದರಿಂದ ಕಾರ್ಯಾಚರಣೆಗೆ ಹೇಳಿ ಮಾಡಿಸಿದ ಆನೆಯಾಗಿದೆ. ಅರಣ್ಯ ಇಲಾಖೆಯ ಮೆಚ್ಚಿನ ಅಭಿಮನ್ಯು ಬಿಟ್ಟರೆ ಈ ಸಾಹಸಕ್ಕೆ ಬೇರೆ ಯಾರೂ ಸಿದ್ಧರಿಲ್ಲ. ಇಲಾಖೆ ಯಾವ ಬೇರೆ ಯಾವುದೇ ಆನೆಯನ್ನು ಸಿದ್ಧಗೊಳಿಸಿಲ್ಲ. ಗುಂಪು ಬಿಟ್ಟ ಆನೆಗಳು, ಮದವೇರಿದ ಆನೆ, ಪಂಡಾನೆ, ಒಂಟಿಸಲಗ ಹೀಗೇ ನಾನಾ ತರಹದ ಆನೆಗಳು ಅರಣ್ಯ ಬಿಟ್ಟು ನಾಡಿನ ಕಡೆ ಬಂದು ಜನರಿಗೆ ತೊಂದರೆ ಕೊಡುತ್ತವೆ. ಇಂತಹ ಆನೆಗಳನ್ನು ಹಿಡಿಯಲು ಸರಿಯಾದ ಕಾರ್ಯಾಚರಣೆ ಸಿದ್ಧ ಮಾಡಬೇಕಾಗುತ್ತದೆ. ಆನೆ ಹಿಡಯುವುದು ಕಷ್ಟದ ಮತ್ತು ಅಪಾಯಕಾರಿ ಕೆಲಸ. ಇಲಾಖೆಯಲ್ಲಿ ಸಾಕಷ್ಟು ನ್ಯೂನ್ಯತೆಗಳಿವೆ. ಇರುವ ಸೌಲಭ್ಯ ಸಾಲುವುದಿಲ್ಲ. ಕೊಟ್ಟಿರುವ ವಾಹನ ಮತ್ತು ಸಿಬ್ಬಂಧಿ ಬಳಕೆಗೆ ಸಾಕಾಗುವುದಿಲ್ಲ. ಇರುವ ಸವಲತ್ತುಗಳಲ್ಲೇ ಇಂತಹ ಸಾಹಸ ಕಾರ್ಯ ಮಾಡಬೇಕಾಗುವ ಜವಬ್ಧಾರಿ ಇಲಾಖೆಯ ಅಧಿಕಾರಿಗಳ ಮೇಲಿದೆ. ಇಂತಹ ಸಾಹಸ ಕಾರ್ಯ ಮಾಡಿದ ಆನೆಗಳನ್ನಲಾಗಲಿ ಅಥವಾ ಸಿಬ್ಬಂಧಿಗಳನ್ನಾಗಲಿ ಗುರುತಿಸುವುದು ಮತ್ತು ಪ್ರೋತ್ಸಾಹಿಸುವುದು ಇಲಾಖೆಯ ಕರ್ತವ್ಯ.


Monday, December 13, 2010

ಹಬ್ಬದ ಸಂಬ್ರಮ

ನಮ್ಮೂರ ಹಬ್ಬದ ಹಿಗ್ಗು ನಿಮಗೆಲ್ಲರಿಗೂ ಇರಲಿ..

ಕ್ರೀಡಾ ಹಬ್ಬಕ್ಕೆತೆರೆ ಎಳೆಯುವ ಮುಂಚೆ.. ಊರ ಹಬ್ಬಕ್ಕೆ ತೆರೆ ತೆರೆಯಿತು..

ಹಂಸ ತೇರೇರಿ ನಗರ ಜಾತ್ರೆಯ ಸುತ್ತಿದ ಗಣಾದಿಪನ ಹಬ್ಬ, ವಿಜೃಂಭಿಸಿದ ಸವಿ ಸಂಭ್ರಮದ ಕ್ಷಣ..


ಆ ದಿನಗಳ ಇನ್ ಫೋ ವರದಿಗಳು..

ದಿನಾಂಕ 4/12/2010
ಉತ್ಸವಗಳ ಉತ್ಸಾಹ... ನಗರದಲ್ಲಿ ಈಗ ಗಣಪತಿಂ ಬಜೇ...

ಇತಿಹಾಸ ಹೊತ್ತ ಈ ಹಬ್ಬ ಸಿಂಗರಿಸಿದೆ ನಗರದ ಮನೆ ಮನ...
ಡೋಲು ತಮಟೆ ಚಂಡೆ.. ವೀರಗಾಸೆ ಡೊಳ್ಳು ಪೊಜಾ ಕುಣಿತಗಳ.. ಬಾಣ ಬಿರಸುಗಳ ಮುಗಿಲು ಮುಟ್ಟುವ ವೈಭವ..
gn2
Tiptur ganesha, tiptur
ಇಂದು ಗಜಾನನ ದರ್ಬಾರು...
ಶ್ರೀ ಸತ್ಯಗಣಪತಿ ವಿಸರ್ಜನಾ ಮಹೋತ್ಸವದ ನಿಮಿತ್ತ ಶನಿವಾರ ಸಂಜೆ ಮತ್ತು ಭಾನುವಾರ ನಗರದಲ್ಲಿ ಅದ್ಧೂರಿ ಮೆರವಣಿಗೆ ನಡೆಯಲಿದೆ.ಬೆಂಗಳೂರು ಕರಗದಷ್ಟೇ ಪ್ರಸಿದ್ಧಿ ಪಡೆದಿರುವ ಇಲ್ಲಿನ ಗಣಪತಿ ಜಾತ್ರೆಗೆ ನಗರ ಸರ್ವ ರೀತಿಯಲ್ಲಿ ಸಿದ್ಧಗೊಂಡಿದೆ. ಶುಕ್ರವಾರ ಗಣಪತಿಯ ಮಹಾ ಮಂಗಳಾರತಿ ಮಹೋತ್ಸವ ಸಂಪ್ರದಾಯದಂತೆ ನೆರವೇರಿತು. ಉತ್ಸವಕ್ಕಾಗಿ ಈಗಾಗಲೇ ನಗರ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ. ನೂರಾರು ಅಂಗಡಿ ಮುಂಗಟ್ಟುಗಳು ನೆರೆದಿವೆ. ಮನೋರಂಜನೆ ಆಟದ ದೊಡ್ಡದೊಡ್ಡ ಗಾಲಿಗಳು, ಉಯ್ಯಾಲೆಗಳು ತಲೆ ಎತ್ತಿವೆ.ಶನಿವಾರ ಸಂಜೆ ಆಕರ್ಷಕ ದರ್ಬಾರು ಹೂ ಮಂಟಪದಲ್ಲಿ ಆರಂಭವಾಗುವ ಗಣಪತಿ ಉತ್ಸವದ ಸೊಬಗನ್ನು ಕಣ್ತುಂಬಿಕೊಳ್ಳಲು ನಗರ ಉತ್ಸುಕವಾಗಿದೆ. ತಮಟೆ, ಡೊಳ್ಳು ಕುಣಿತ, ವೀರಗಾಸೆ, ಚಂಡೇವಾದ್ಯ, ಪೂಜಾಕುಣಿತ, ನಾದಸ್ವರ, ಕೀಲುಕುದುರೆ ಮತ್ತಿತರೆ ಕಲಾತಂಡಗಳು ಪಾಲ್ಗೊಳ್ಳಲಿವೆ. ರಾಜಬೀದಿಗಳಲ್ಲಿ ರಾತ್ರಿಯಿಡೀ ಮೆರವಣಿಗೆ ಸಾಗುತ್ತದೆ. ಮಧ್ಯರಾತ್ರಿ ಕೆರೆ ಏರಿ ಮೇಲೆ ಆಕರ್ಷಕ ಸಿಡಿಮದ್ದು, ಬಾಣ, ಬಿರುಸು ಪ್ರದರ್ಶನವಿರುತ್ತದೆ. ಭಾನುವಾರ ನಗರದ ವಿವಿದ ಬಡಾವಣೆಗಳಲ್ಲಿ ಸಾಗುವ ಮೆರವಣಿಗೆ ಸಂಜೆಗೆ ಕೆರೆ ಬಳಿ ಬಂದು ನಿಲ್ಲಲಿದೆ. ನಂತರ ವಿಸರ್ಜನೆ ಸಂದರ್ಭದಲ್ಲಿ ಆತ್ಯಾಕರ್ಷಕ ಸಿಡಿ ಮದ್ದು ಪ್ರದರ್ಶನಗೊಳ್ಳುತ್ತದೆ. ಮದ್ಯ ನಿಷೇಧ: ಗಣಪತಿ ಉತ್ಸವದ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನ ೨ರಿಂದ ಭಾನುವಾರ ಮಧ್ಯರಾತ್ರಿ ೧೨ರವರೆಗೆ ನಗರದಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಬಂದೋಬಸ್ತ್: ಜಾತ್ರೆಗೆ ಅಪಾರ ಜನ ಸೇರುವುದರಿಂದ ಕಾನೂನು ಸುವಸ್ಥೆ ಕಾಪಾಡಲು ವ್ಯಾಪಾಕ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತಿದೆ. ಇಲ್ಲಿನ ಎಲ್ಲಾ ಸಿಬ್ಬಂದಿ ಜತೆಗೆ ಜಿಲ್ಲಾ ಮೀಸಲು ಪಡೆಯ ನಾಲ್ಕು ತುಕಡಿ, ಹೊರಗಿನ ಮೂವರು ಸಿಪಿಐ, ಐವರು ಪಿಎಸ್‌ಐ, ಎಂಟು ಎಎಸ್‌ಐ ಸೇರಿದಂತೆ ಅಪಾರ ಸಿಬ್ಬಂದಿಯನ್ನು ಬಳಸಲಾಗುತ್ತಿದೆ ಎಂದು ಎಎಸ್‌ಪಿ ಡಾ. ಬೋರಲಿಂಗಯ್ಯ ತಿಳಿಸಿದ್ದಾರೆ.
5/12/2010..
ವಿಜೃಂಬಿಸುತಿದೆ ಗಜಾನನ ಉತ್ಸ..
ನಗರ ತುಂಬಿದೆ ಸಾಂಸ್ಕೃತಿಕ ವೈಭವ..
ರಾತ್ರೆ ಜಾತ್ರೆ ಜೊತೆ ಮನಸೂರೆಗೊಂಡ ಪಟಾಕಿ ಸಿಡಿಮದ್ದು ಪ್ರದರ್ಶನ...
ganap2
Cultural activities in ganesh festival, tiptur

ಸತ್ಯಗಣಪತಿ ವಿಸರ್ಜನಾ ಮಹೋತ್ಸವದ ನಿಮಿತ್ತ ಶನಿವಾರ ಸಂಜೆ ವೈಭವ ಅದ್ಧೂರಿ ಮೆರವಣಿಗೆ ನಡೆಯಿತು. ಶುಕ್ರವಾರ ಗಣಪತಿಯ ಮಹಾ ಮಂಗಳಾರತಿ ಮಹೋತ್ಸವ ಸಂಪ್ರದಾಯದಂತೆ ನೆರವೇರಿತು. ನಗರವೆಲ್ಲ ದೀಪಾಲಂಕಾರಗಳಿಂದ ಕಂಗೊಳಿಸುತಿತ್ತು . ಶನಿವಾರ ಸಂಜೆ ಆಕರ್ಷಕ ದರ್ಬಾರು ಹೂ ಮಂಟಪದಲ್ಲಿ ಆರಂಭವಾದ ಗಣಪತಿ ಉತ್ಸವದ ಸೊಬಗನ್ನು ನೆರೆದ ನಗರದ ಇಪ್ಪತ್ತು ಸಾವಿರ ಜನ ಕಣ್ತುಂಬಿಕೊಂಡರು . ತಮಟೆ, ಡೊಳ್ಳು ಕುಣಿತ, ವೀರಗಾಸೆ, ಚಂಡೇವಾದ್ಯ, ಪೂಜಾಕುಣಿತ, ನಾದಸ್ವರ, ಕೀಲುಕುದುರೆ ಮತ್ತಿತರೆ ಕಲಾತಂಡಗಳು ರಾತ್ರಿಯಿಡೀ ತಮ್ಮ ಕಲಾವಂತಿಕೆ ಪ್ರದರ್ಶಿಸಿದವು. ರಾಜಬೀದಿಗಳಲ್ಲಿ ರಾತ್ರಿಯಿಡೀ ಮೆರವಣಿಗೆ ಸಾಗಿತು. ಮಧ್ಯರಾತ್ರಿ ಕೆರೆ ಏರಿ ಮೇಲೆ ಆಕರ್ಷಕ ಸಿಡಿಮದ್ದು, ಬಾಣ, ಬಿರುಸು ಪ್ರದರ್ಶನ ನೆರೆದವರ ಮನಸೂರೆಗೂಂಡವು. ಮೆರವಣಿಗೆ ನಗರಬೀದಿಗಳಲ್ಲಿ ಈಗಲು ನಡೆಯುತ್ತಿದೆ.
ಮುಂದಿನ ವೀಡಿಯೂ ವರದಿಗಳನ್ನು ನಿಮ್ಮ ತಿಪಟೂರು ಇನ್ ಫೋ ನ್ಯೂಸ್ ಚಾನೆಲ್ ನಲ್ಲಿ ವೀಕ್ಷಿಸಿ...

Wednesday, December 8, 2010

ಇದು ಗಜಾನನ ದರ್ಬಾರು...

Ganesh festival in tiptur, tipturinfo.com

Ganesh festival in tiptur

Ganesh festival in tiptur
Ganesh festival in tiptur












Ganesh festival in tiptur

Wednesday, November 24, 2010

ಬಲಿ..... ಬೇಟೆ....

ಬಲಿ ನಂತರ ಬೇಟೆ..,   
                             (ಚಿರತೆಯ ಹಿಡಿಯಲು ಮಗು ಬಲಿ ಬೇಕಾಯ್ತು!)
.
                     
 ೧.ಎಚ್ಚತ್ತು ಹೇಳಿದರು ಕೇಳದ ಅರಣ್ಯ ಇಲಾಖೆ             



                            ೨.ಬೇಟೆ ನಂತರ ಜನರು ಹೇಳಿದ್ದು ಇನ್ನೊಂದಿದೆ..,  
                                ಕಾಡು ಕಡಿಯುತ್ತಿರೋ   ಕಾವಲು ಜನ....                          


     ೩ .ಟೋಂಕ ಕಟ್ಟಿ ನಿಂತ ಜನ ಬೇಟೆಗೆ ಹೊರಟರು...,  

  



ಕಾಡು ತೊರೆದ ಚಿರೆತೆಗಳು ಮಾಂಸಕ್ಕೆ ಅಲೆಯುತ್ತಿವೆ...

Thursday, October 7, 2010

ಹಾಸ್ಯ ಸಾಮ್ರಾಟ ನರಸಿಂಹರಾಜು

Narashimaraju
ಅಭಿನಯ ಹಾಸ್ಯದ ಮೂಲಕವೇ ಕನ್ನಡಚಿತ್ರ ರಸಿಕರನ್ನು ನಕ್ಕುನಗಿಸಿದ ಧೀಮಂತ ನಟ ನರಸಿಂಹರಾಜು. ಕನ್ನಡಚಿತ್ರರಂಗ ಕಂಡ ಅಪ್ರತಿಮ ಕಲಾವಿದರಲ್ಲಿ ನರಸಿಂಹರಾಜು ಅವರು ಪ್ರಮುಖರು. 1926ರಿಂದ 1979ರವರೆಗೆ ರಂಗಭೂಮಿ ಹಾಗೂ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ ನರಸಿಂಹರಾಜು ಹಾಸ್ಯನಟರಾಗಿ ಎಷ್ಟರ ಮಟ್ಟಿಗೆ ಬೆಳೆದರೆಂದರೆ, ರಾಜ್ ಕುಮಾರ್ ನಾಯಕ ನಟರಾದರೆ, ಅವರ ಗೆಳೆಯನ ಪಾತ್ರಕ್ಕೆ ನರಸಿಂಹರಾಜು ಆಯ್ಕೆಯಾಗುತ್ತಿದ್ದರು. ನಾಯಕನ ಗೆಳೆಯ, ಸಹೋದ್ಯೋಗಿ, ಸಹಾಯಕ ಹೀಗೆ ಯಾವುದಾದರೂ ಒಂದು ಪಾತ್ರ ಸೃಷ್ಟಿಸಿ ನರಸಿಂಹ ರಾಜು ಅವರಿಗೆ ಅವಕಾಶ ನೀಡಲಾಗುತ್ತಿತ್ತು.ನರಸಿಂಹರಾಜು ಅವರು ಹುಟ್ಟಿದ್ದು ತುಮಕೂರು ಜಿಲ್ಲೆ ತಿಪಟೂರಿನಲ್ಲಿ. ಚಿಕ್ಕಪ್ಪನ ಪ್ರೋತ್ಸಾಹದಿಂದ ಚಿಕ್ಕಂದಿನಲ್ಲಿಯೇ ರಂಗಭೂಮಿ ಪ್ರವೇಶಿಸಿದ ನರಸಿಂಹರಾಜು ಬಾಲನಟನಾಗಿ ಖ್ಯಾತಿ ಪಡೆದರು. 1954ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನರಸಿಂಹ ರಾಜು ನಟಿಸಿದ ಮೊದಲ ಚಿತ್ರ ಬೇಡರಕಣ್ಣಪ್ಪ. ರಾಜ್ ಕುಮಾರ್ ನಾಯಕ ನಟರಾದ ಮೊದಲ ಚಿತ್ರವೂ ಆದ ಬೇಡರ ಕಣ್ಣಪ್ಪದಲ್ಲಿ ಕಾಶಿ ಪಾತ್ರದಲ್ಲಿ ಕಾಣಿಸಿಕೊಂಡ ನರಸಿಂಹ ರಾಜು ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ಮಕ್ಕಳರಾಜ್ಯ ಚಿತ್ರದಲ್ಲಿ ಎರಡನೇ ನಾಯಕನಾಗಿ ನಟಿಸಿ ಮಿಂಚಿದ ಅವರು, ಸತ್ಯಹರಿಶ್ಚಂದ್ರ ಚಿತ್ರದಲ್ಲಿ ನಕ್ಷತ್ರಿಕರಾಗಿ ಮಾಡಿದ ಪಾತ್ರ ಮರೆಯುವಂತೆಯೇ ಇಲ್ಲ. ನಂತರ ನೂರಾರು ಚಿತ್ರಗಳಲ್ಲಿ ಹಾಸ್ಯನಟರಾಗಿ ವಿಜೃಂಭಿಸಿದರು. ಪ್ರೊಫೆಸರ್ ಹುಚ್ಚೂರಾಯ ಚಿತ್ರದ ಮೂಲಕ ನಾಯಕ ನಟರಾಗಿಯೂ ಅಭಿನಯಿಸಿದರು. ಹಲವು ಚಿತ್ರಗಳಲ್ಲಿ ದ್ವಿಪಾತ್ರ, ತ್ರಿಪಾತ್ರಗಳಲ್ಲೂ ಮನಸೂರೆಗೊಂಡರು.ಭಕ್ತ ಮಲ್ಲಿಕಾರ್ಜುನ, ಭಕ್ತ ಮಾರ್ಕಂಡೇಯ, ಅಣ್ಣ ತಂಗಿ, ರಣಧೀರ ಕಂಠೀರವ, ದಶಾವತಾರ, ಜೇನುಗೂಡು, ಅಮರಶಿಲ್ಪಿ ಜಕಣಾಚಾರಿ ಮೊದಲಾದ ಚಿತ್ರಗಳಲ್ಲಿ ತಮ್ಮ ಅಪ್ರತಿಮ ನಟನಾ ಕೌಶಲ್ಯ, ಮುಖಭಂಗಿ, ಸಂಭಾಷಣೆ, ಮಾತಿನಧಾಟಿಗಳಿಂದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು. ನರಸಿಂಹರಾಜು ಇಂದು ನಮ್ಮೊಂದಿಗಿಲ್ಲ ಆದರೆ ಅವರ ನೆನಪು ಸದಾ ಹಸಿರು.

Wednesday, October 6, 2010

ಮೂಡಲಪಾಯ ಯಕ್ಷಗಾನ

ತಿಪಟೂರು ತಾಲ್ಲೂಕು, ತುಮಕೂರು ಜಿಲ್ಲೆ
ಕರ್ನಾಟಕ.


ಕರ್ನಾಟಕದ ಜನಪದ ಕಲೆಗಳಲ್ಲಿ ಅತ್ಯಂತ ವರ್ಣಮಯವೂ, ವೈಭಪೋಪೇತವೂ ಆದದ್ದು ಯಕ್ಷಗಾನ. ಅದರ ವಿವಿಧ ಪ್ರಕಾರಗಳಲ್ಲಿ ಯಾವುದೋ ಒಂದೆರಡು ತಾವೇ ಪ್ರದರ್ಶನದ ಅನುಸ್ಯೂತತೆ ಮತ್ತು ಜನಪದ ಪ್ರೋತ್ಸಹದಿಂದ ಒಂದು ವಿಶಿಷ್ಟ ರಂಗಭೂಮಿಯಾಗಿಬಿಟ್ಟು ಇಂದು ದೇಶ ವಿದೇಶಗಳ ಹೃನ್ಮನಗಳನ್ನು ಸೆಳೆದಿರುವುದು ವಾಸ್ತಾವವಷ್ಟೆ. ಇದರಲ್ಲಿ ಮೂಲಸಂಪ್ರದಾಯದ ವೇಷಗಾರಿಕೆ ಮತ್ತು ಸಂಗೀತದ ಚೌಕಟ್ಟು ಮುಖ್ಯವಾದ ಆಕರ್ಷಣೆ ಎನಿಸಿದೆ. ಪ್ರತಿ ಪ್ರಕಾರದಲ್ಲೂ ಇರತಕ್ಕ ಮೂಲ ಸೌಂದರ‍್ಯಂಶಗಳನ್ನು ಗುರುತಿಸಿ ಕಾಲಕಾಲಕ್ಕೆ ತಕ್ಕ ರಂಗಪರಿವರ್ತನೆ ಮಾಡಿಕೊಂಡೇ ಜಾನಪದ ಇವರೆಗೆ ಬದುಕಿ ಬಂದಿರುವುದು.
ಒಂದಾನೊಂದು ಕಾಲದಲ್ಲಿ ಜನಪದ ರಂಜನೆಯ ಏಕಮೇವ ಮುಖ್ಯ ಕಲೆ ಎನಿಸಿದ್ದಿರಬಹುದಾದ ಮೂಡಲಪಾಯದ ಆಭರಣ, ವೇಷಭೂಷಣ, ನೃತ್ಯಗಳ ವೈಭವವನ್ನು ಮತ್ತೊಮ್ಮೆ ಮರುಕಳಿಸಲು ವಿದ್ಯಾವಂತ ಜನರ ನೇತೃತ್ವ ಹಾಗೂ ಜನಪದ ಕಲಾವಿದರ ಸಹಕಾರ ಎರಡೂ ಅಗತ್ಯ. ಅಂಥ ಒಂದು ಸನ್ನಿವೇಶವನ್ನು ಕೊನೇಹಳ್ಳಿಯ ಮೂಡಲಪಾಯ ಟ್ರಸ್ಟ್‌ನ ಸಂಘಡಕರು ಸೃಷ್ಟಿಮಾಡುತ್ತಿದ್ದಾರೆ. ಇದು ಮೂಡಲಪಾಯದ ಅಭಿವೃದ್ಧಿ ಮತ್ತು ಪರಿಷ್ಕಾರ ಹಾಗೂ ಸಂಶೋಧನೆಗೆ ನಾಂದಿಯಾಗುವುದರಿಂದ ಈ ವಿಷಯದಲ್ಲಿ ಕೊನೇಹಳ್ಳಿಯೊ ಮೊದಲಹಳ್ಳಿಯಾಗುತ್ತದೆ. ಹಳ್ಳಿಯಿಂದ ಡಿಲ್ಲಿಯವರೆಗೂ ಪ್ರಭಾವಬೀರುವಷ್ಟು ಕೆಲಸ ಈ ಕೇಂದ್ರದಿಂದ ನಡೆಯುತ್ತಿದೆ
ಮೂಡಲಪಾಯ ಯಕ್ಷಗಾನದ ಪುನರುಜ್ಜೀವನದ ದೃಷ್ಟಿಯಿಂದ ೧೯೬೯ ರಲ್ಲಿ ಸ್ಥಾಪನೆಗೊಂಡ ಶ್ರೀ ಬಿದರೆಯಮ್ಮ ಯಕ್ಷಗಾನ ಮಂಡಲಿ ಈಗ ಮೂಡಲಪಾಯ ಯಕ್ಷಗಾನ ಟ್ರಸ್ಟ್ ಆಗಿ ಆ ನಿಟ್ಟಿನಲ್ಲಿ ಹಲವು ದಿಟ್ಟ ಹೆಜ್ಜೆಗಳನ್ನು ಇಟ್ಟಿದೆ. ೧೯೮೧ ರಲ್ಲಿ ವಿಜೃಂಭಣೆಯಿಂದ ದಶಮಾನೋತ್ಸವವನ್ನು ಆಚರಿಸಿಕೊಂಡ ಈ ಮಂಡಲಿ, ಈ ಅವಧಿಯಲ್ಲಿ ಸಾಧಿಸಿರುವ ಕಾರ್ಯಗಳು ಹಲವು.
ಮೂಲೆಗುಂಪಾಗಿದ್ದ ಮೂಡಲಪಾಯ ಯಕ್ಷಗಾನವನ್ನು ಪುನರುಜ್ಜೀವನ ಗೊಳಿಸುವ ಹಾಗೂ ಅದಕ್ಕೆ ನವ ಚೈತನ್ಯ ತುಂಬುವ ಏಕಮಾತ್ರ ದೃಷ್ಟಿಯಿಂದಲೇ ಸ್ಥಾಪನೆಗೊಂಡ ಈ ಟ್ರಸ್ಟ್ ಅದನ್ನು ಯಶಸ್ವಿಯಾಗಿ ಸಾಧಿಸುತ್ತಾ ಬಂದಿದೆ. ಮೂಡಲಪಾಯ ಯಕ್ಷಗಾನ ಕ್ಷೇತ್ರದಲ್ಲೆಲ್ಲ ಇದೊಂದು ಚಳುವಳಿಯನ್ನೇ ನಡೆಸಿತೆನ್ನಬಹುದು. ನಶಿಸಿ ಹೋಗುತ್ತಿದ್ದ ಕಲೆಗೆ ಜೀವತುಂಬಿದ್ದಲ್ಲದೆ, ಹೊಸ ಹುರುಪನ್ನೂ ಅದಕ್ಕೆ ತಂದುಕೊಟ್ಟಿತು. ಕಲಾವಿದರ ಸಂಘಟನೆ, ತರಬೇತಿ ವೇಷ ಭೂಷಣಗಳ ಸುಧಾರಣೆ, ಕುಣಿತ ಮತ್ತು ಹಿಮ್ಮೇಳದಲ್ಲಿ ನಯಗಾರಿಕೆ ಹಾಗೂ ಮೂಲಕ್ಕೆ ಧಕ್ಕೆ ಒದಗದಂತೆ ಎಚ್ಚರ, ಇವೆಲ್ಲವನ್ನೂ ಹಲವು ಪ್ರದರ್ಶನಗಳ ಮೂಲಕ ಕಲಾವಿದರಿಗೆ ಮತ್ತು ಭಾಗವತರಿಗೆ ಮನದಟ್ಟಾಗುವಂತೆ ಮಾಡಲಾಗಿದೆ. ಕಲಾವಿದರಿಗೆ ಹಾಗೂ ಭಾಗವತರಿಗೆ ತಕ್ಕ ಗೌರವ ದೊರೆಯುವಂತೆ ಮಾಡುವುದರ ಮೂಲಕ ಅವರುಗಳಿಗೆ ತಮ್ಮ ಕಲೆಯ ಬಗೆಗೆ ಹೆಚ್ಚು ಗೌರವ ಮೂಡುವಂತೆ ಮಾಡುವಲ್ಲಿಯೂ ಇದು ಹಿಂದೆ ಬಿದ್ದಿಲ್ಲ. ಕರ್ನಾಟಕದ ಪ್ರಸಿದ್ಧ ಬಯಲಾಟದ ತಂಡಗಳನ್ನು ಒಂದೆಡೆ ಕಲೆಕೆಹಾಕಿ ಪ್ರದರ್ಶನಗಳನ್ನು ಏರ್ಪಡಿಸುವುದರ ಮೂಲಕ ಆ ಕ್ಷೇತ್ರದಲ್ಲಿ ಸದಭಿರುಚಿಯ ಪೈಪೋಟಿ ಉಂಟಾಗುವಂತೆ ಪ್ರೇರೇಪಿಸಿದುದಲ್ಲದೆ. ಮಲಗಿದ್ದ ಎಷ್ಟೋ ತಂಡಗಳು ಮೈ ಕೊಡವಿ ಏಳುವಂತೆಯೂ ಪ್ರೇರೇಸುವಲ್ಲಿಯೂ ಇದು ಮುಂದಾಗಿದೆ.
ಮೂಡಲಪಾಯ ಯಕ್ಷಗಾನ ಟ್ರಸ್ಟ್‌ನ ಆಶ್ರಯದಲ್ಲಿಯೇ, ಯುವಕರಿಗೆ ತರಬೇತಿ ನೀಡಲು ತರಬೇತಿ ಕೇಂದ್ರ ವೊಂದು ಕೊನೇಹಳ್ಳಿಯಲ್ಲಿ ಆರಂಭವಾಗಿದೆ. ಮುಂದಿನ ಪೀಳಿಗೆಗೆ ಇದೊಂದು ವರವಾಗಿ ಲಭಿಸಿದೆ.
ಈಗ ಇವೆಲ್ಲಕ್ಕೂ ಕಿರೀಟಪ್ರಾಯವಾಗಿ ವಿಶಾಲವಾದ ಬಯಲು ಪ್ರದೇಶದಲ್ಲಿ ಬಯಲು ರಂಗಮಂದಿರವೊಂದು ಸ್ಥಾಪನೆಗೊಂಡಿದೆ. ದೂರಕ್ಕೆ ಯಕ್ಷಗಾನದ ಕಿರೀಟಾಕೃತಿಯಲ್ಲಿ ಕಾಣುವ ಇದರ ಮುಂಭಾಗ ಯಾರನ್ನಾದರೂ ಬೆರಗು ಗೊಳಿಸುವಂಥದು. ಎಲ್ಲ ಸವಲತ್ತುಗಳನ್ನೂ ಒಳಗೊಂಡ ಇದರ ಒಳಭಾಗ, ಆಧುನಿಕ ರಂಗಮಂದಿರಕ್ಕೆ ಸಮನಾದುದು.
೧೯೬೯ ರಿಂದ ೧೯೮೩ ಅವದಿಯಲ್ಲಿಯ ಇದರ ಹೆಜ್ಜೆ ಗುರುತುಗಳನ್ನು ಗಮನಿಸುತ್ತ ಬಂದಾಗ ಯಾರಿಗಾದರೂ ಹೆಮ್ಮೆ ಎನಿಸುವುದರಲ್ಲಿ ಆಶ್ಚರ್ಯವಿಲ್ಲ.
ಇದೆಲ್ಲದರ ಹಿಂದೆ ದುಡಿದ ಕೈಗಳು ಅದೆಷ್ಟು! ಪ್ರಪ್ರಥಮವಾಗಿ ಡಾ. ಜೀ. ಶಂ. ಪರಮಶಿವಯ್ಯ ಅವರನ್ನು ಇಲ್ಲಿ ನೆನೆಯಬೇಕಾಗುತ್ತದೆ. ಈ ಎಲ್ಲ ಯೋಜನೆಯ ಮೂಲ ಶಿಲ್ಪಿಯೇ ಅವರು. ಅದರ ಸ್ಥಾಪಕರು, ಯೋಜಕರು ಎಲ್ಲವು ಅವರೇ. ತನು ಮನ ಧನವನ್ನು ಅರ್ಪಿಸಿ ಡಾ. ಜೀಶಂಪ ಅವರು ಇದಕ್ಕಾಗಿ ದುಡಿದಿದ್ದಾರೆ ಎಂಬುದು ಉತ್ಪ್ರೇಕ್ಷೆಯ ಮಾತೂ ಅಲ್ಲ, ಸವಕಲು ಮಾತೂ ಅಲ್ಲ. ಹಗಲು ರಾತ್ರಿ ಎನ್ನದೆ ಇದಕ್ಕಾಗಿ ಬೇಸರವಿಲ್ಲದೆ ತಿರುಗಿ ಶ್ರಮವಹಿಸಿ ದುಡಿದಿದ್ದಾರೆ. ಮೂಡಲಪಾಯ ಯಕ್ಷಗಾನ ಟ್ರಸ್ವಿನ ಸಾಧನೆಯನ್ನು ಗಮನಿಸುತ್ತ ಬಂದ ಎಲ್ಲರಿಗೂ ಇದು ತಿಳಿದಿರುವ ವಿಷಯ. ಅವರ ಮಾರ್ಗದರ್ಶನದಲ್ಲಿ ಮೂಡಲಪಾಯ ಯಕ್ಷಗಾನ ಟ್ರಸ್ಟ್, ಹಾಗೂ ಮೂಡಲಪಾಯ ಯಕ್ಷಗಾನ ಕಲಾವಿದರು ಸುರಕ್ಷಿತವಾಗಿ ತಮ್ಮ ಸಾಧನೆಯ ಹಾದಿಯಲ್ಲಿದ್ದಾರೆ. ಇದೆಲ್ಲದರ ಕೀರ್ತಿ ಗೌರವ ಡಾ. ಜೀಶಂಪ ಅವರಿಗೆ ಸಲ್ಲುತ್ತದೆ. ಈ ಎಲ್ಲ ಕಾರ್ಯ ಚಟುವಟಿಕೆಗಳೂ ನಡೆಯುತ್ತಿರುವುದು ತಿಪಟೂರು ತಾಲ್ಲೂಕು ಕೊನೇಹಳ್ಳಿಯಲ್ಲಿ. ಯಾವುದೇ ಮಹತ್ವದ ಸಾಧನೆಯನ್ನು ಮಾಡಲು ಮೊದಲು ಒಂದುನೆಲೆ ಬೇಕು.ಅದಿಲ್ಲದೆ ಏನನ್ನು ಸಾಧಿಸಲು ಸಾಧ್ಯವಾಗದು. ಅಂತಹ ನೆಲೆಯನ್ನು ಒದಗಿಸಿಕೊಟ್ಟವರು ಅಲ್ಲಿಯ ಧನಿಕರೂ, ಉದಾರಿಗಳೂ, ಕಲಾವಿದರೂ, ಕಲಾಭಿಮಾನಿಗಳೂ ಆದ ಶ್ರೀ ಬಿ. ನಂಜುಂಡಪ್ಪನವರು, ಅವರ ಸಹೋದರರಾದ ಶ್ರೀ ಎ. ಬಿ. ಬಸಪ್ಪನವರು ಮತ್ತು ಮನೆಮಂದಿ.
ಇವರುಗಳು ಈ ಟ್ರಸ್ವಿಗಾಗಿ, ಕಲೆಯ ಉದ್ಧಾರಕ್ಕಾಗಿ ತೋರುವ ಶ್ರದ್ಧೆ, ಆಸಕ್ತಿ ಮಾತಿಗೆ ನಿಲುಕದ್ದು. ತಮ್ಮ ಮನೆಯ, ವ್ಯವಸಾಯದ ಕೆಲಸವನ್ನೂ ಎಷ್ಟೋಬಾರಿ ಬದಿಗೊತ್ತಿ ಈ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಈ ಮನೆತನ ಕಲೆ ಮತ್ತು ಶಿಕ್ಷಣಕ್ಕಾಗಿ ತೋರುತ್ತ ಬಂದಿರುವ ಆಸಕ್ತಿ, ಕೊಡುತ್ತ ಬಂದಿರುವ ಪ್ರೋತ್ಸಾಹ ಯಾರಾದರೂ ಮೆಚ್ಚಿಕೊಳ್ಳು ವಂತಹುದು.
ಶ್ರೀ ಎಂ. ಆರ್ಯಮಿತ್ರ ಅವರು ನಮ್ಮ ಜನಾನುರಾಗಿ ಉನ್ನತ ಅಧಿಕಾರಿಗಳಲ್ಲಿ ಒಬ್ಬರು. ಕಲಾಭಿಮಾನಿಗಳೂ, ಸಂಸ್ಕ್ರತಿ ಸಂಪನ್ನರೂ ಆದ ಅವರು ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿ ಬಂದದ್ದೂ ಮೂಡಲಪಾಯ ಯಕ್ಷಗಾನ ಕೇಂದ್ರಕ್ಕೆ ಜೀವಬಂದಂತಾಯಿತು. ಮೂಡಲಪಾಯ ಯಕ್ಷಗಾನ ರಂಗಮಂದಿರದ ನಿರ್ಮಾಣದಲ್ಲಿ ಅವರ ಪಾತ್ರ ಅತ್ಯಂತ ಗಣ್ಯವಾದುದು.
ಹನಿಗೂಡಿದರೆ ಹಳ್ಳ ಎಂಬಂತೆ, ಈ ಟ್ರಸ್ವಿನ ಅಭಿವೃದ್ಧಿ ಸರ್ವತೋಮುಖವಾಗಿ ಆಗಲು ಹಲವು ಆಸಕ್ತರು, ಕಲಾವಿದರು, ಕಲಾಭಿಮಾನಿಗಳು, ಸ್ವಯಿಚ್ಛೆಯಿಂದ ದುಡಿದಿದ್ದಾರೆ ಭಾಗವತ ಪಟೇಲ್ ನಾರಸಪ್ಪನವರು, ಮೊದಲಿ ನಿಂದಲೂ ಮೂಡಲಪಾಯ ಯಕ್ಷಗಾನ ಟ್ರಸ್ವಿನ ಸಂಬಂಧವನ್ನು ಇಟ್ಟುಕೊಂಡು ಬಂದವರು. ಅಷ್ಟೇ ಅಲ್ಲ, ಟ್ರಸ್ವಿನ ಎಲ್ಲ ಯೋಜನೆಗಳಲ್ಲಿಯೂ ಪಾಲ್ಗೊಂಡು, ಕಲಾವಿದರನ್ನು ತರಬೇತಿಕೊಟ್ಟು ಬೆಳೆಸುವುದರ ಜೊತೆಯಲ್ಲಿ ಅವರ ಬೆಳವಣಿಗೆಯನ್ನು ಕಂಡುಕೊಂಡವರು. ಅತ್ಯಂತ ಪ್ರತಿಭಾಶಾಲಿಯಾದ ಈ ಅಪೂರ್ವ ಕಲಾವಿದ ತಾಳವನ್ನು ಹಿಡಿದುನಿಂತರೆ ರಂಗದ ಮೇಲೆ ನವ ಚೈತನ್ಯವನ್ನು ತುಂಬುತ್ತಾರೆ. ಕರ್ನಾಟಕದ ಬಹುಭಾಗವನ್ನು ತಮ್ಮ ತಂಡದೊಂದಿಗೆ ಸುತ್ತಿರುವ ಶ್ರೀ ನಾರಸಪ್ಪನವರು ಮೂಡಲಪಾಯ ಯಕ್ಷಗಾನದ ಒಂದು ಅಪೂರ್ವ ಆಸ್ತಿ.
ಶ್ರೀ ಎ. ಬಿ. ಬಸಪ್ಪನವರು ಈ ಕೇಂದ್ರದ ಮತ್ತೊಬ್ಬ ಶ್ರದ್ಧಾವಂತ ಕೆಲಸಗಾರರು, ಗಣ್ಯ ಜಮಿನ್ಧಾರರಾದ ಅವರ ಸೇವೆ ವಿಶಿಷ್ಟವಾದುದು.
ಶ್ರೀ ಎ. ಎನ್. ರಾಜು ಮತ್ತು ಶ್ರೀ ಕೆ. ಟಿ. ರಂಗಪ್ಪ ಇವರುಗಳು ಟ್ರಸ್ಟಿನ ಕಾರ್ಯದರ್ಶಿಗಳಾಗಿ, ಟ್ರಸ್ಟಿನ ಅಭಿವೃದ್ಧಿ ಕಾರ್ಯದಲ್ಲಿ ಶ್ರಮವಹಿಸಿ ದುಡುಯುತ್ತ ಬಂದಿದ್ದಾರೆ. ಶ್ರೀಗಳಾದ ಎನ್. ಸತ್ಯನಾರಾಯಣ್, ಕೆ, ಶಿವಪ್ಪ, ವಿಷ್ಣುಕುಮಾರ್, ಜಯಣ್ಣ, ಶಂಕರಪ್ಪ, ಮಂಜಣ್ಣ, ಸಿದ್ದಾಪುರದ ರಾಜಣ್ಣ, ಶಿವಬಸಪ್ಪ, ಮಂಜುನಾಥ್, ನಾರಾಯಣಪ್ಪ ಮುಂತಾದವರು ಹಗಲಿರುಳೆನ್ನದೆ ದುಡಿದಿದ್ದಾರೆ. ಈ ಪಟ್ಟಿ ಬೆಳೆಸುತ್ತಾಹೋದರೆ ಬೆಳೆಯುತ್ತಾಹೋಗುತ್ತದೆ. ಒಂದು ದೊಡ್ಡ ತಂಡವೇ ಈ ಎಲ್ಲ ಕಾರ್ಯದಲ್ಲಿಯೂ ಭಾಗಿಯಾಗಿದೆ ಎಂದರೆ ಹೆಚ್ಚು ಸಮಂಜಸ.

Friday, October 1, 2010

ನೆನೆ ನೆನೆ ಗಾಂಧಿಯನು














ಖಾಲೀ ಗದ್ದಲದ ಈ ನಾಡಿನ ಉದ್ದಗಲಕ್ಕೂ
ಈಗ ಶಾಂತಿ ನೆಲೆಸಿದೆ.
ನರನಾಡಿಯೆಲ್ಲ ನಿಂತೇ ಹೋದಂತಾಗಿ
ನಾವೆಲ್ಲ ಯೋಗಿಗಳಾಗಿದ್ದೇವೆ:
ಹಾದಿ ಮಾತು, ಬೀದಿ ಭಾಷಣಗಳ ಸದ್ದಡಗಿ
ಕಿವಿ ತುಂಬ ಹುಲುಸಾಗಿ ಕೂದಲು ಬೆಳೆಯುತ್ತಿದೆ.
-
ಅನಾಚಾರ ಅತ್ಯಾಚಾರ ಭ್ರಷ್ಟಾಚಾರಗಳ ಬದಲು
ಪತ್ರಿಕೆಗಳ ತುಂಬ ಶುದ್ಧ ಸಮಾಚಾರ ತುಂಬಿದೆ.
ಎಲ್ಲಾ ಸಾಮಾನುಗಳ ಬೆಲೆ ಇಳಿದೂ ಇಳಿದೂ
ಈಗ ಕೈಗೆ ಸಿಗದಂತಾಗಿವೆ.
ಬಿಡಾಡಿ ನಾಯಿಗಳ ನಿರ್ಬೀಜೀಕರಣವಾಗಿದೆ.
ಭಾರತದ ಜನಸಂಖ್ಯೆ ಇಳಿಯುತ್ತಿದೆ.
-
ನಾಳಿನ ನಾಗರಿಕರಾದ ಇಂದಿನ ಮಕ್ಕಳೆಲ್ಲ
ಸರಿಯಾಗಿ ಸಾಲೆಗೆ ಹೋಗಿ
ಒಂದು ಎರಡು ಬಾಳೆಲೆ ಹರಡು
ಕಲಿಯುತ್ತಿದ್ದಾರೆ.
ಹಸಗಂಡು ಮನೆಗೆ ಬಂದು
ಮಣ್ಣಿನ ವಾಸನೆಯ ತಾಜಾ ಊಟ ಮಾಡುತ್ತಾರೆ.
-
ಜಾಣ ಬಾಬಾಗಳಿಗೆ ಹುಚ್ಚಗೌಡರ ಬೆನ್ನುಸಿಕ್ಕು
ಧೂರ್ಮೋದ್ಧಾರದ ಸವಾರಿ ಮುನ್ನಡೆದಿದೆ.
ಅಸ್ಪೃಶ್ಯ ದೇವರಿಗೆ ಹರಿಜನರ ದರ್ಶನವಾಗಿ
ಅವರ ಉದ್ಧಾರವೂ ಆಗುತ್ತಿದೆ.
-
ಸರಕಾರದ ಕೆಲಸ ದೇವರ ಕೆಲಸವಾಗಿ
ತುಪ್ಪದ ದೀಪ ಢಾಳಾಗಿ ಉರಿಯುತ್ತಿವೆ.
ವಿಶೇಷ ಪ್ರಾರ್ಥನೆಗಳಿಂದಾಗಿ ದೇಶದ ತುಂಬ
ಜಿಟಿ ಜಿಟಿ ಮಳೆ ಹಿಡಿದಿದೆ.
ನಮ್ಮ ತ್ರಿವರ್ಣ ಧ್ವಜ ತೊಯ್ದು ತುಪ್ಪಡಿಯಾಗಿ
ಅಶೋಕ ಚಕ್ರ ಸ್ಥಿರವಾಗಿದೆ.
-
ಹೆದ್ದಾರಿಯ ಮೇಲೆ ಕೆಟ್ಟುನಿಂತ ಟ್ರಕ್ಕು ಕೂಡ
ನಾಡ ಮುನ್ನಡೆದಿದೆ- ಎಂಬ ಸಂದೇಶ ಹೊತ್ತಿದೆ.
ರೇಡಿಯೋದ ಗಿಳಿವಿಂಡು, ಅದೋ,
ಒಕ್ಕೊರಲಿಂದ ಅದೇ ಹಾಡು ಹಾಡುತ್ತಿದೆ.
ಧನ್ಯತೆಯ ಈ ಕ್ಷಣದಿ, ಓ ಮುದ್ದುರಂಗ,
ಕಿವಿ ಮುಚ್ಚಿ, ಕಣ್ಣು ಮುಚ್ಚಿ,
ನೆನೆ ನೆನೆ ಗಾಂಧಿಯನು.
(ಯಾವ ಗಾಂಧಿ? ಅಂತ ತಿಳಿಯದೇ ಪೆದ್ದಲಿಂಗ?)
ಬಾಯಿ ಮುಚ್ಚಿ,
ನೆನೆ ನೆನೆ ಗಾಂಧಿಯನು.
- ಚಂದ್ರಶೇಖರ ಪಾಟೀಲ

Blog Archive